ಸ್ವಾತಂತ್ರ್ಯ ದಿನಾಚರಣೆ ಮುಗಿದು ದಿನಗಳೇ ಉರುಳಿವೆ.
ಹಿಂದೆಲ್ಲ ಧ್ವಜ ಹಾರಿಸಿ ಸಿಹಿ ಹಂಚಿ ಸಂಭ್ರಮಿಸಿದ ಮರು ದಿನವೇ ತ್ರಿವರ್ಣ ಧ್ವಜಗಳು ಗೂಡು ಸೇರುತ್ತಿದ್ದವು.
ಆದರೆ ಇಂದಿನ ಪರಿಸ್ಥಿತಿ ತುಸು ಭಿನ್ನವಾಗಿದೆ. ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ಕಳೆದು ಮೂಱ್ನಾಲ್ಕು ದಿನಗಳು ಕಳೆದರೂ ತ್ರಿವರ್ಣ ಧ್ವಜ ಹಾರುತ್ತಲೇ ಇದೆ.
ಇದಕ್ಕೆ ಕಾರಣ ಮರೆವು ಅಲ್ಲ.
ಇದಕ್ಕೆ ಕಾರಣ ಮರೆವು ಅಲ್ಲ.
ಅಣ್ಣ ಹಜಾರೆ ಎಂಬ ಮುತ್ಸದ್ಧಿ ಯಿಂದ ಹತ್ತಿಕೊಂಡಿರುವ ಭ್ರಷ್ಟಾಚಾರ ವಿರುದ್ಧದ ಕಿಡಿ. ಇಂದು ಈ ಹೋರಾಟಕ್ಕೆ ದೇಶದಾದ್ಯಂತ ಬೆಂಬಲ ಸಿಕ್ಕಿದೆ. ಎಲ್ಲರ ಕೈಯಲ್ಲಿ ವಿಜೃಂಭಿಸುತ್ತಿರುವ ತ್ರಿವರ್ಣಧ್ವಜದ ಪಟ ಪಟ ಸದ್ದಿಗೆ ಭ್ರಷ್ಟರು ಕಂಗಾಲಾಗಿ ಹೋಗಿದ್ದಾರೆ. ಜನಲೋಕಪಾಲ್ ಜಾರಿಗಾಗಿ ಅಣ್ಣಾ ಹಜಾರೆ ಹಮ್ಮಿಕೊಂಡಿರುವ ಸತ್ಯಾಗ್ರಹ ಇದೀಗ ದೇಶದೆಲ್ಲೆಡೆ ಎರಡನೇ ಸ್ವಾತಂತ್ರ್ಯ ಸಂಗ್ರಾಮವೋ ಎಂಬಂತೆ ರೂಪುಗೊಂಡಿದೆ.
ಪ್ರತೀ ರಾಜ್ಯದಲ್ಲೂ ಅಣ್ಣಾ ಹೋರಾಟಕ್ಕೆ ಬೆಂಬಲ ಸಿಗುತ್ತಿದೆ. ವಿದ್ಯಾರ್ಥಿಗಳು, ನೌಕರರು, ಸ್ವಯ ಸೇವಾ ಸಂಸ್ಥೆಗಳು, ವೈದ್ಯರು, ವಕೀಲರು, ಸ್ವಾತಂತ್ರ್ಯ ಹೋರಾಟಗಾರರು... ಹೀಗೆ ದೇಶ ಪ್ರೇಮಿಗಳ ದಂಡೇ ರಸ್ತೆಗಿಳಿದು ಬೆಂಬಲ ಸೂಚಿಸುತ್ತಿವೆ.
ಹೀಗೆ ಅಣ್ಣಾರ ಉದ್ದೇಶ ಈಡೇರಿಕೆಗಾಗಿ ಮೆರವಣಿಗೆ, ಸತ್ಯಾಗ್ರಹ, ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುವ ಮಂದಿಯ ಕೈಯಲೆಲ್ಲಾ ತ್ರಿವರ್ಣ ಧ್ವಜ ರಾರಾಜಿಸುತ್ತಿರುವುದು ಸ್ವಾತಂತ್ರ್ಯ ಸಂಗ್ರಾಮವನ್ನು ಮತ್ತೆ ನೆನಪಿಸುತ್ತಿದೆ.
'ತ್ರಿವರ್ಣ ಧ್ವಜಕೈಯಲ್ಲಿದ್ದರೆ ಅದೇನೋ ಉತ್ಸಾಹ ಬಂದಂತಾಗುತ್ತದೆ. ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ತ್ರಿವರ್ಣಧ್ವಜ ಹಿಡಿದೇ ಭಾಗವಹಿಸುವುದು ಇಷ್ಟವಾಗುತ್ತದೆ' ಎನ್ನುತ್ತಾಳೆ ಕಾಲೇಜು ವಿದ್ಯಾರ್ಥಿನಿ ಶೋಭ.
ಬೆಂಗಳೂರಿನಲ್ಲಿ ನಡೆದ ಸತ್ಯಾಗ್ರಹದಲ್ಲಿ ವಿಶೇಷವಾಗಿ ಗಮನಿಸಬಹುದಾದ್ದೆಂದರೆ ಈ ಬಾರಿ ಎಲ್ಲರಲ್ಲೂ ಖಾದಿ ಬಾವುಟ ಹಿಡಿದಿರುವುದು. ಪ್ಲಾಸ್ಟಿಕ್ ನಿಂದಾಗುವ ಅಪಾಯದ ಕುರಿತು ಎಲ್ಲರೂ ಜನಜಾಗೃತಿ ಮೂಡಿರುವುದಕ್ಕೆ ಇದು ಸಾಕ್ಷಿ ನೀಡಿದೆ. ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದ ಜನತೆ ಪ್ಲಾಸ್ಟಿಕ್ ಬಾವುಟ ತೊರೆಯುವ ಮೂಲಕ ದೇಶ ಪ್ರೇಮವಷ್ಟೇ ಅಲ್ಲ, ಪರಿಸರ ಪ್ರೇಮವನ್ನೂ ತೋರಿಸಿದ್ದಾರೆ.
ಅಣ್ಣಾ ನೇತೃತ್ವದಲ್ಲಿ ಆರಂಭವಾಗಿರುವ ಸತ್ಯಾಗ್ರಹ, ಚಳವಳಿಗಳು ಸರಕಾರಕ್ಕೆ ನಷ್ಟ ತಂದು ಕೊಟ್ಟರೂ ತ್ರಿವರ್ಣ ಧ್ವಜ ವ್ಯಾಪಾರಿಗಳಿಗೆ ಮಾತ್ರ ಭರ್ಜರಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟಿದೆ.
ವ್ಯಾಪಾರ ಆರಂಭಿಸಿದ ಬಳಿಕ ಇದೇ ಮೊದಲ ಬಾರಿಗೆ ಈ ಸಂಖ್ಯೆಯಲ್ಲಿ ಧ್ವಜ ಮಾರಾಟವಾಗಿದೆ ಎನ್ನುತ್ತಾರೆ ವ್ಯಾಪಾರಿಯೋರ್ವರು.
'ಜೈ ಹೋ ಅಣ್ಣಾ!
ಪ್ರತೀ ರಾಜ್ಯದಲ್ಲೂ ಅಣ್ಣಾ ಹೋರಾಟಕ್ಕೆ ಬೆಂಬಲ ಸಿಗುತ್ತಿದೆ. ವಿದ್ಯಾರ್ಥಿಗಳು, ನೌಕರರು, ಸ್ವಯ ಸೇವಾ ಸಂಸ್ಥೆಗಳು, ವೈದ್ಯರು, ವಕೀಲರು, ಸ್ವಾತಂತ್ರ್ಯ ಹೋರಾಟಗಾರರು... ಹೀಗೆ ದೇಶ ಪ್ರೇಮಿಗಳ ದಂಡೇ ರಸ್ತೆಗಿಳಿದು ಬೆಂಬಲ ಸೂಚಿಸುತ್ತಿವೆ.
ಹೀಗೆ ಅಣ್ಣಾರ ಉದ್ದೇಶ ಈಡೇರಿಕೆಗಾಗಿ ಮೆರವಣಿಗೆ, ಸತ್ಯಾಗ್ರಹ, ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುವ ಮಂದಿಯ ಕೈಯಲೆಲ್ಲಾ ತ್ರಿವರ್ಣ ಧ್ವಜ ರಾರಾಜಿಸುತ್ತಿರುವುದು ಸ್ವಾತಂತ್ರ್ಯ ಸಂಗ್ರಾಮವನ್ನು ಮತ್ತೆ ನೆನಪಿಸುತ್ತಿದೆ.
'ತ್ರಿವರ್ಣ ಧ್ವಜಕೈಯಲ್ಲಿದ್ದರೆ ಅದೇನೋ ಉತ್ಸಾಹ ಬಂದಂತಾಗುತ್ತದೆ. ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ತ್ರಿವರ್ಣಧ್ವಜ ಹಿಡಿದೇ ಭಾಗವಹಿಸುವುದು ಇಷ್ಟವಾಗುತ್ತದೆ' ಎನ್ನುತ್ತಾಳೆ ಕಾಲೇಜು ವಿದ್ಯಾರ್ಥಿನಿ ಶೋಭ.
ಬೆಂಗಳೂರಿನಲ್ಲಿ ನಡೆದ ಸತ್ಯಾಗ್ರಹದಲ್ಲಿ ವಿಶೇಷವಾಗಿ ಗಮನಿಸಬಹುದಾದ್ದೆಂದರೆ ಈ ಬಾರಿ ಎಲ್ಲರಲ್ಲೂ ಖಾದಿ ಬಾವುಟ ಹಿಡಿದಿರುವುದು. ಪ್ಲಾಸ್ಟಿಕ್ ನಿಂದಾಗುವ ಅಪಾಯದ ಕುರಿತು ಎಲ್ಲರೂ ಜನಜಾಗೃತಿ ಮೂಡಿರುವುದಕ್ಕೆ ಇದು ಸಾಕ್ಷಿ ನೀಡಿದೆ. ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದ ಜನತೆ ಪ್ಲಾಸ್ಟಿಕ್ ಬಾವುಟ ತೊರೆಯುವ ಮೂಲಕ ದೇಶ ಪ್ರೇಮವಷ್ಟೇ ಅಲ್ಲ, ಪರಿಸರ ಪ್ರೇಮವನ್ನೂ ತೋರಿಸಿದ್ದಾರೆ.
ಅಣ್ಣಾ ನೇತೃತ್ವದಲ್ಲಿ ಆರಂಭವಾಗಿರುವ ಸತ್ಯಾಗ್ರಹ, ಚಳವಳಿಗಳು ಸರಕಾರಕ್ಕೆ ನಷ್ಟ ತಂದು ಕೊಟ್ಟರೂ ತ್ರಿವರ್ಣ ಧ್ವಜ ವ್ಯಾಪಾರಿಗಳಿಗೆ ಮಾತ್ರ ಭರ್ಜರಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟಿದೆ.
ವ್ಯಾಪಾರ ಆರಂಭಿಸಿದ ಬಳಿಕ ಇದೇ ಮೊದಲ ಬಾರಿಗೆ ಈ ಸಂಖ್ಯೆಯಲ್ಲಿ ಧ್ವಜ ಮಾರಾಟವಾಗಿದೆ ಎನ್ನುತ್ತಾರೆ ವ್ಯಾಪಾರಿಯೋರ್ವರು.
'ಜೈ ಹೋ ಅಣ್ಣಾ!
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ